Posts

Showing posts with the label Kumar Swamy

ಟಾರ್ಗೆಟ್ ಗೌಡ ಬಾಯ್ಸ್ v/s ಸೂಲಿಬೆಲೆ

Image
 ಸೂಲಿಬೆಲೆ ಓರ್ವ ಭಾಷಣಕಾರ, ಸಮಾಜದ ಹಿತಚಿಂತಕ ಅಷ್ಟೇ. ಯಾವ ಚುನಾವಣೆಗೂ ನಿಂತಿಲ್ಲ, ಯಾವ ಸರ್ಕಾರಿ ಅಧಿಕಾರಿಯೂ ಅಲ್ಲ. ಶಾಲು  ಹಾಕಿಕೊಂಡು ಬರುವ ಯಾವುದೇ ಸಂಘಟನೆಯ ನಕಲಿ_ಓರಾಟಕೋರಾ ಕೂಡ ಅಲ್ಲ.  ಯಾವುದೇ ಪಾರ್ಟಿಯ ಜನ ನಾಯಕನೂ ಅಲ್ಲ,  ಯಕಶ್ಚಿತ್ ಭಾಷಣಕಾರನೊಬ್ಬನ ಮೇಲೇಕೆ ಇಷ್ಟೊಂದು ದ್ವೇಷ ! ಆತ   ಯಾವ ಪಾರ್ಟಿಯ ಸದಸ್ಯನು ಅಲ್ಲ, ಸೂಲಿಬೆಲೆಯಿಂದ ಯಾವುದೇ ಪಕ್ಷಕ್ಕೆ ನಷ್ಟವಾಗಿಲ್ಲ. ಮತ್ತೇಕೆ ಅಷ್ಟೊಂದು ವಿರೋಧ ?   (ಹೆಚ್ಚಿನ ವಿವರಗಳಿಗೆ, ಕೆಳಗೆ ನೀಲಿ ಬಣ್ಣದ ಅಕ್ಷರಗಳ ಮೇಲೆ ಒತ್ತಿ) ದೇವಾಲಯಗಳನ್ನು, ಪುಷ್ಕರಣಿಗಳನ್ನು ಹುಡುಗರ ಜೊತೆ ಸೇರಿಕೊಂಡು ಸ್ವಚ್ಛಗೊಳಿಸುವ ಅವರಿಂದ ನಿಜವಾಗಿ ಯಾರಿಗೆ ತೊಂದರೆ ? ಅವರ ಮೇಲೇಕೆ ಇಷ್ಟೊಂದು  ಉರಿ ?!  ನಿಜವಾಗಿ ಯಾರಿಗೆ ನಷ್ಟ ? ಅಲ್ಲೇ ಇರೋದು ನಿಜವಾದ ಸಂಚು! ಏಕೆಂದರೆ  ಎರಡೂ  "ಕೌಟುಂಬಿಕ ಪಾರ್ಟಿಯ ಕಮಿಷನ್ ಚೇಲಾಗಳು" ಇವಾಗಲೇ 2024ರ ಲೋಕಸಭಾ ಚುನಾವಣೆಗೆ ರೆಡಿಯಾಗುತ್ತಿದ್ದಾರೆ.  ಆಶ್ಚರ್ಯವಾದರೂ ಸತ್ಯ.   ಏಕೆಂದರೆ ಎಷ್ಟೋ ಗೌಡ ಯುವಕರು ಸೂಲಿಬೆಲೆಯವರ ಭಾಷಣವನ್ನು ಕೇಳಿ,  "ಕುಟುಂಬ ಕುಟುಂಬ  ಅಂತಿದ್ದವರು ಈಗ ರಾಷ್ಟ್ರೀಯತೆಯ ಕಡೆಗೆ ವಾಲುತ್ತಿದ್ದಾರೆ". ನಮ್ಮನ್ನು ಇಷ್ಟು ವರ್ಷ 'ಗೌಡರ ಗತ್ತು' ಅಂತ ಹೇಳಿ ಹೇಳಿ ಓಟು ಹಾಕಿಸಿಕೊಂಡು ನಮ್ಮನ್ನು ಕುರಿ ಮಾಡಿದರು ಎಂದು ಮುಗ್ಧವಾಗಿದ್ದ ಒಕ್ಕ...